⁠ಈ ಕಾರ್ಯಕ್ರಮವು ಈಗ ಮುಕ್ತಾಯಗೊಂಡಿದೆ.
ಮುಂದೆ ಆಯೋಜಿಸುವ ಘಟನಾವಳಿಯಲ್ಲಿ ನೀವು ನಮ್ಮೊಂದಿಗೆ ಭಾಗಿಯಾಗಲು ಇಚ್ಛಿಸಿದಲ್ಲಿ, ದಯವಿಟ್ಟು ಘಟನಾವಳಿಗಳು ಪುಟಕ್ಕೆ ಭೇಟಿ ನೀಡಿ.

ಎಸ್‌ಆರ್‌ಎಫ್‌ ಮಾತೃ ಕೇಂದ್ರದ ಭವಿಷ್ಯಕ್ಕಾಗಿ ಒಂದು ದೃಷ್ಟಿಕೋನ

(ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ಒಂದು ವಿಶೇಷ ನೇರ ಪ್ರಸಾರ)

ಶನಿವಾರ, ಸೆಪ್ಟೆಂಬರ್ 12, 2026

ರಾತ್ರಿ 10:30 ರಿಂದ

(ಅಧಿಕೃತ ಭಾರತೀಯ ಕಾಲಮಾನ)

ಸ್ವಾಮಿ ಚಿದಾನಂದ ಗಿರಿಯವರೊಂದಿಗೆ ವಿಶೇಷ ನೇರ ಪ್ರಸಾರ — ಸೆಪ್ಟೆಂಬರ್ 12, 2026

ಕಾರ್ಯಕ್ರಮದ ಬಗ್ಗೆ

ವೈಎಸ್ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿ ಹಾಗೂ ಎಸ್‌ಆರ್‌ಎಫ್‌ ಉಪಾಧ್ಯಕ್ಷರಾದ ಸ್ವಾಮಿ ವಿಶ್ವಾನಂದ ಗಿರಿ ಅವರು, ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯ ನವೀಕರಣ ಮತ್ತು ಪುನರ್ನಿರ್ಮಾಣ ಯೋಜನೆಯ ಹಿಂದಿನ ದೃಷ್ಟಿಕೋನ ಮತ್ತು ಸ್ಫೂರ್ತಿಯನ್ನು ಅನಾವರಣಗೊಳಿಸುತ್ತಾ, ಪೂರ್ಣಗೊಂಡ ಯೋಜನೆಯ “ಮುನ್ನೋಟವನ್ನು” ಹಂಚಿಕೊಳ್ಳಲಿದ್ದಾರೆ; ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾವು ನಿಮ್ಮನ್ನು ಆದರದಿಂದ ಆಹ್ವಾನಿಸುತ್ತೇವೆ.

ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯನ್ನು (ಎಸ್‌ಆರ್‌ಎಫ್‌ ಮಾತೃ ಕೇಂದ್ರ) ಪರಮಹಂಸ ಯೋಗಾನಂದಜೀಯವರು 1925ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಸ್ಥಾಪಿಸಿದರು. ಇದು ಪ್ರಾಚೀನ ಕ್ರಿಯಾಯೋಗ ವಿಜ್ಞಾನವನ್ನು ಸಮಸ್ತ ಮಾನವಕುಲಕ್ಕೆ ಪಸರಿಸುವ ಅವರ ವಿಶ್ವ ಕಾರ್ಯಾಚರಣೆಯ ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಕೇಂದ್ರವಾಗಿದೆ.

ಈ ಕಾರ್ಯಕ್ರಮವು ಸೆಪ್ಟೆಂಬರ್ 12, ಶನಿವಾರ ರಾತ್ರಿ 10:30 ಗಂಟೆಯಿಂದ ( ಭಾರತೀಯ ಕಾಲಮಾನ) ಲಾಸ್ ಏಂಜಲೀಸ್‌ನಲ್ಲಿರುವ ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಪ್ರಧಾನ ಕಚೇರಿಯಿಂದ ನೇರ ಪ್ರಸಾರವಾಗಲಿದೆ ಮತ್ತು ನಂತರವೂ ವೀಕ್ಷಿಸಲು ಲಭ್ಯವಿರುತ್ತದೆ.

ಹೊಸ ಸಂದರ್ಶಕರು

ನೀವು ವೈಎಸ್ಎಸ್ ಮತ್ತು ಪರಮಹಂಸ ಯೋಗಾನಂದರ ಬೋಧನೆಗಳಿಗೆ ಹೊಸಬರಾಗಿದ್ದರೆ, ಕೆಳಗಿನ ಲಿಂಕ್‌ಗಳನ್ನು ಅನ್ವೇಷಿಸಲು ಇಚ್ಛಿಸಬಹುದು:

ಯೋಗಿಯ ಆತ್ಮಕಥೆ

ವಿಶ್ವಾದ್ಯಂತ ಆಧ್ಯಾತ್ಮಿಕ ಮೇರುಕೃತಿಯೆಂದು ಕೊಂಡಾಡಲ್ಪಟ್ಟಿರುವ, ಪರಮಹಂಸರು ಆಗಾಗ ಹೀಗೆ ನುಡಿಯುತ್ತಿದ್ದರು, “ನಾನು ದೇಹತ್ಯಾಗ ಮಾಡಿದ ನಂತರ, ಈ ಗ್ರಂಥವೇ ನನ್ನ ದೂತವಾಗುವುದು.”

ವೈಎಸ್ಎಸ್ ಪಾಠಗಳು

ನೀವು ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ನಿಮ್ಮ ಜೀವನವನ್ನು ಪರಿವರ್ತಿಸುವ ಮತ್ತು ಸಮತೋಲಿತವಾದ ಯಶಸ್ವೀ ಜೀವನವನ್ನು ನಡೆಸಲು ಸಹಾಯ ಮಾಡುವ, ಮನೆಯಿಂದಲೇ ಅಧ್ಯಯನ ಮಾಡಬಹುದಾದ ಪಾಠ ಕ್ರಮಗಳು.

ಇದನ್ನು ಹಂಚಿಕೊಳ್ಳಿ